ग्रन्थपरिचयः

Devatarchane

by Admin · ಕನ್ನಡ

Devatarchane ಕನ್ನಡ Featured
Free shipping in India on orders above ₹ 500
Authenticity guaranteed
7-day return on damaged or misprinted copies
ಕನ್ನಡ

Devatarchane

by Admin

In Stock

ಪಂಚರಾತ್ರಾದಿ ಆಗಮಗಳಲ್ಲಿ ತಿಳಿಸಿರುವಂತೆ ದೇವಪೂಜಾ ಭಗವದನುಗ್ರಹಕ್ಕೆ ಮುಖ್ಯ ಸಾಧನವಾಗಿದೆ. ‘‌ನ’ ದೇವಾ ಮೃಚ್ಛೆಲಾಮಯಾಃ ಎಂದು ಶ್ರೀಮದ್ ಭಾಗವತವು ವಿವರಿಸಿದೆ. ಹಾಗಾಗಿ ಪ್ರತಿಮಾದಿಗಳಲ್ಲಿ ಪೂಜಿಸುವಾಗ ಗೋಲಕತ್ರಯದ ಚಿಂತನೆ ಅತಿಮುಖ್ಯವಾಗಿದೆ. ಈ ಎಚ್ಚರದಿಂದ ತಂತ್ರಸಾರೋಕ್ತವಿಧಿಯಲ್ಲಿ ಪೂಜೆಯನ್ನು ಸಲ್ಲಿಸಿದಲ್ಲಿ ಭಗವದನುಗ್ರಹಕ್ಕೆ ಪಾತ್ರಾರಾಗುವೆವು.
ಶ್ರೀವ್ಯಾಸರಾಜಮಠದ ಸಂಪ್ರದಾಯಕ್ಕೆ ಅನುಗುಣವಾದ, ಅನೇಕ ಪ್ರಾಚೀನ ಸಂಪ್ರದಾಯಗಳಿಂದ ಪ್ರಾಪ್ತವಾದ ಸೂಕ್ಷ್ಮವಿಚಾರಗಳನ್ನು ಒಳಗೊಂಡ ಹಾಗೂ ಯೋಗದೀಪಿಕಾದಿ ಗ್ರಂಥಗಳಲ್ಲಿ ಉಪದಿಷ್ಟವಾದ ಕೆಲವು ವಿಚಾರಗಳನ್ನು ಒಳಗೊಂಡ ಹೊತ್ತಿಗೆಯು ಇದಾಗಿದೆ.

ಸಂಪಾದಕರು : ವಿದ್ವಾನ್ ಕಂಬಾಲೂರು ಶ್ರೀವತ್ಸಾಚಾರ್ಯ
ಶ್ರೀ ವ್ಯಾಸರಾಜಮಠದ ಶಿಷ್ಯರೇ ಆದ ಶ್ರೀ ಕಂಬಾಲೂರು ಶ್ರೀವತ್ಸಾಚಾರ್ಯರು ಸ್ವತಃ ವಿದ್ವಾಂಸರಾಗಿ ಆಚಾರ ಸಂಪನ್ನರೂ ಆಗಿದ್ದು ಶ್ರೀಮಠದ ಅನೇಕ ಸತ್ ಸಂಪ್ರದಾಯಗಳನ್ನೂ ತಿಳಿದವರಾಗಿದ್ದಾರೆ. ಶ್ರೀಯುತರು ತುಂಬ ಶ್ರಮವಹಿಸಿ ಅನೇಕ ಗ್ರಂಥಗಳನ್ನು ಸಂಶೋಧಿಸಿ ಪ್ರಸಕ್ತ ಹೊತ್ತಿಗೆಯನ್ನು ಸಿದ್ದಗೊಳಿಸಿರುವರು. ಅವರಿಗೆ ಶ್ರೀವ್ಯಾಸತೀರ್ಥ ಸಂಶೋಧನ ಪ್ರತಿಷ್ಠಾನವು ಆಭಾರಿಯಾಗಿದೆ.

₹ 200 ₹ 240 Save 17%

Inclusive of all taxes

1

About this book

ಪಂಚರಾತ್ರಾದಿ ಆಗಮಗಳಲ್ಲಿ ತಿಳಿಸಿರುವಂತೆ ದೇವಪೂಜಾ ಭಗವದನುಗ್ರಹಕ್ಕೆ ಮುಖ್ಯ ಸಾಧನವಾಗಿದೆ. ‘‌ನ’ ದೇವಾ ಮೃಚ್ಛೆಲಾಮಯಾಃ ಎಂದು ಶ್ರೀಮದ್ ಭಾಗವತವು ವಿವರಿಸಿದೆ. ಹಾಗಾಗಿ ಪ್ರತಿಮಾದಿಗಳಲ್ಲಿ ಪೂಜಿಸುವಾಗ ಗೋಲಕತ್ರಯದ ಚಿಂತನೆ ಅತಿಮುಖ್ಯವಾಗಿದೆ. ಈ ಎಚ್ಚರದಿಂದ ತಂತ್ರಸಾರೋಕ್ತವಿಧಿಯಲ್ಲಿ ಪೂಜೆಯನ್ನು ಸಲ್ಲಿಸಿದಲ್ಲಿ ಭಗವದನುಗ್ರಹಕ್ಕೆ ಪಾತ್ರಾರಾಗುವೆವು.
ಶ್ರೀವ್ಯಾಸರಾಜಮಠದ ಸಂಪ್ರದಾಯಕ್ಕೆ ಅನುಗುಣವಾದ, ಅನೇಕ ಪ್ರಾಚೀನ ಸಂಪ್ರದಾಯಗಳಿಂದ ಪ್ರಾಪ್ತವಾದ ಸೂಕ್ಷ್ಮವಿಚಾರಗಳನ್ನು ಒಳಗೊಂಡ ಹಾಗೂ ಯೋಗದೀಪಿಕಾದಿ ಗ್ರಂಥಗಳಲ್ಲಿ ಉಪದಿಷ್ಟವಾದ ಕೆಲವು ವಿಚಾರಗಳನ್ನು ಒಳಗೊಂಡ ಹೊತ್ತಿಗೆಯು ಇದಾಗಿದೆ.

ಸಂಪಾದಕರು : ವಿದ್ವಾನ್ ಕಂಬಾಲೂರು ಶ್ರೀವತ್ಸಾಚಾರ್ಯ
ಶ್ರೀ ವ್ಯಾಸರಾಜಮಠದ ಶಿಷ್ಯರೇ ಆದ ಶ್ರೀ ಕಂಬಾಲೂರು ಶ್ರೀವತ್ಸಾಚಾರ್ಯರು ಸ್ವತಃ ವಿದ್ವಾಂಸರಾಗಿ ಆಚಾರ ಸಂಪನ್ನರೂ ಆಗಿದ್ದು ಶ್ರೀಮಠದ ಅನೇಕ ಸತ್ ಸಂಪ್ರದಾಯಗಳನ್ನೂ ತಿಳಿದವರಾಗಿದ್ದಾರೆ. ಶ್ರೀಯುತರು ತುಂಬ ಶ್ರಮವಹಿಸಿ ಅನೇಕ ಗ್ರಂಥಗಳನ್ನು ಸಂಶೋಧಿಸಿ ಪ್ರಸಕ್ತ ಹೊತ್ತಿಗೆಯನ್ನು ಸಿದ್ದಗೊಳಿಸಿರುವರು. ಅವರಿಗೆ ಶ್ರೀವ್ಯಾಸತೀರ್ಥ ಸಂಶೋಧನ ಪ್ರತಿಷ್ಠಾನವು ಆಭಾರಿಯಾಗಿದೆ.