ग्रन्थपरिचयः

Suktha Stotra Sangraha

by Admin · संस्कृतम्

Suktha Stotra Sangraha संस्कृतम् Featured
Free shipping in India on orders above ₹ 500
Authenticity guaranteed
7-day return on damaged or misprinted copies
संस्कृतम्

Suktha Stotra Sangraha

by Admin

In Stock

“ಸೂಕ್ತಸ್ತೋತ್ರಸಂಗ್ರಹಃ’ಎಂಬ ಸಂಪುಟವು ಪಾರಾಯಣೋಪಯೋಗಿಯಾದ ಅಪೂರ್ವವಾದ ಭಾಗ್ಯಸೂಕ್ತ, ಪ್ರಾತಃಸೂಕ್ತಮ್, ರುದ್ರಪ್ರಶ್ನೆ, ರಾತ್ರಿಸೂಕ್ತ, ವಿಷ್ಣುಸೂಕ್ತ, ಪವಮಾನಸೂಕ್ತ, ತೈತ್ತಿರೀಯ ಉಪನಿಷತ್ತು ಮೊದಲಾದ ವೇದಭಾಗವನ್ನು ಒಳಗೊಂಡಿದೆ. ಇದಲ್ಲದೇ ವಿಪುಲವಾದ ಸಂಪತ್ತನ್ನು ಕರುಣಿಸುವ ನಾರಾಯಣಹೃದಯ ಹಾಗೂ ಲಕ್ಷ್ಮೀಹೃದಯಗಳ ಸಂಯೋಜನೆ ಇಲ್ಲಿದೆ.
ಕರ್ನಾಟಕ ವಿದ್ಯಾಸಿಂಹಾಸನಾಧೀಶ್ವರಾದ ಶ್ರೀ ಮದ್ವ್ಯಾಸತೀರ್ಥಪೂಜ್ಯಚರಣರು ರಚಿಸಿರುವ ಶ್ರೀನಿವಾಸಸ್ತುತಿ, ಲಘುಶಿವಸ್ತುತಿ, ಶ್ರೀ ಶ್ರೀ ಪಾದರಾಜಪಂಚರತ್ನಮಾಲಿಕಾ, ಶ್ರೀಬ್ರಹ್ಮಣ್ಯತೀಥಪಂಚರತ್ನಮಾಲಿಕಾಗಳು ಇಲ್ಲಿ ಅಡಕಗೊಂಡಿವೆ. ನಮ್ಮ ಮಠದ ಜ್ಞಾನಿವರೇಣ್ಯರಾದ ಶ್ರೀರಾಮತೀರ್ಥರು ರಚಿಸಿದ ಗುರ್ವಷ್ಟಕ, ಶ್ರೀಲಕ್ಷ್ಮೀವಲ್ಲಭತೀರ್ಥರು ರಚಿಸಿದ ಪಂಚವೈಷ್ಣವ ಸ್ತೋತ್ರ ಅಪೂರ್ವಸಂಗ್ರಹವಾಗಿವೆ. ಶ್ರೀಶೇಷಚಂದ್ರಿಕಾಚಾರ್ಯರ ಸ್ತೋತ್ರ, ಕಾವೇರಿ ಸ್ತುತಿ, ಶ್ರೀವ್ಯಾಸಯತೀಶಚಿತ್ರಚರಿತಮ್ ಹಾಗೂ ಶ್ರೀಮಠದ ಗುರುಪರಂಪರೆಯ ಸ್ತೋತ್ರಗಳು ಭಾವುಕರ ಮನಸೂರೆಗೊಳ್ಳುವುದರಲ್ಲಿ ಸಂದೇಹವಿಲ್ಲ. ಪೌರಾಣಿಕಾವಾದ ಶ್ರೀಶನೈಶ್ಚರಕೃತ ನರಸಿಂಹಸ್ತೋತ್ರ, ಭಗವದ್ಧ್ಯಾನಗಳು ಹಾಗೂ ದೇವತಾತಾರತಮ್ಯ – ನವಗ್ರಹಸ್ತೋತ್ರ ಮುಂತಾದವುಗಳು ನಿತ್ಯಪಾರಾಯಣಕ್ಕೆ ಅತ್ಯಂತ ಉಪಕಾರಿಲಯಾಗಿವೆ.
“ಪೌರಾಣೈಃ ಪ್ರಾಕೃತೈರಪಿ” ಎಂಬ ಭಾಗವತಸಂದೇಶದಂತೆ ಪುರಾಣಗಳಲ್ಲಿ ಬಂದ ಹಾಗೂ ಜ್ಞಾನಿಗಳು ರಚಿಸಿದ ಕೃತಿಗಳನ್ನು ಪೂಜಾವಸಾನದಲ್ಲಿ ಪಠಿಸುವುದು ಭಗವಂತನಿಗೆ ಪ್ರಿಯಕರವಾಗಿದೆ. ಈ ಹಿನ್ನೆಲೆಯಲ್ಲಿ ಭಾವುಕರ ಪಾರಾಯಣಕ್ಕೆ ಉಪಯೋಗಿಯಾಗುವಂತೆ ಇದನ್ನು ಸಿದ್ಧಪಡಿಸಲಾಗಿದೆ. ಸುಜನರು ನಿತ್ಯ ಪಾರಾಯಣವನ್ನು ಮಾಡುವುದರ ಮೂಲಕ ಇದರ ಪ್ರಯೋಜನವನ್ನು ಪಡೆದು ಶ್ರೀಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರಾರಾಗಬೇಕೆಂದು ಅಪೇಕ್ಷಿಸುತ್ತೇವೆ.

₹ 100 ₹ 120 Save 17%

Inclusive of all taxes

1

About this book

“ಸೂಕ್ತಸ್ತೋತ್ರಸಂಗ್ರಹಃ’ಎಂಬ ಸಂಪುಟವು ಪಾರಾಯಣೋಪಯೋಗಿಯಾದ ಅಪೂರ್ವವಾದ ಭಾಗ್ಯಸೂಕ್ತ, ಪ್ರಾತಃಸೂಕ್ತಮ್, ರುದ್ರಪ್ರಶ್ನೆ, ರಾತ್ರಿಸೂಕ್ತ, ವಿಷ್ಣುಸೂಕ್ತ, ಪವಮಾನಸೂಕ್ತ, ತೈತ್ತಿರೀಯ ಉಪನಿಷತ್ತು ಮೊದಲಾದ ವೇದಭಾಗವನ್ನು ಒಳಗೊಂಡಿದೆ. ಇದಲ್ಲದೇ ವಿಪುಲವಾದ ಸಂಪತ್ತನ್ನು ಕರುಣಿಸುವ ನಾರಾಯಣಹೃದಯ ಹಾಗೂ ಲಕ್ಷ್ಮೀಹೃದಯಗಳ ಸಂಯೋಜನೆ ಇಲ್ಲಿದೆ.
ಕರ್ನಾಟಕ ವಿದ್ಯಾಸಿಂಹಾಸನಾಧೀಶ್ವರಾದ ಶ್ರೀ ಮದ್ವ್ಯಾಸತೀರ್ಥಪೂಜ್ಯಚರಣರು ರಚಿಸಿರುವ ಶ್ರೀನಿವಾಸಸ್ತುತಿ, ಲಘುಶಿವಸ್ತುತಿ, ಶ್ರೀ ಶ್ರೀ ಪಾದರಾಜಪಂಚರತ್ನಮಾಲಿಕಾ, ಶ್ರೀಬ್ರಹ್ಮಣ್ಯತೀಥಪಂಚರತ್ನಮಾಲಿಕಾಗಳು ಇಲ್ಲಿ ಅಡಕಗೊಂಡಿವೆ. ನಮ್ಮ ಮಠದ ಜ್ಞಾನಿವರೇಣ್ಯರಾದ ಶ್ರೀರಾಮತೀರ್ಥರು ರಚಿಸಿದ ಗುರ್ವಷ್ಟಕ, ಶ್ರೀಲಕ್ಷ್ಮೀವಲ್ಲಭತೀರ್ಥರು ರಚಿಸಿದ ಪಂಚವೈಷ್ಣವ ಸ್ತೋತ್ರ ಅಪೂರ್ವಸಂಗ್ರಹವಾಗಿವೆ. ಶ್ರೀಶೇಷಚಂದ್ರಿಕಾಚಾರ್ಯರ ಸ್ತೋತ್ರ, ಕಾವೇರಿ ಸ್ತುತಿ, ಶ್ರೀವ್ಯಾಸಯತೀಶಚಿತ್ರಚರಿತಮ್ ಹಾಗೂ ಶ್ರೀಮಠದ ಗುರುಪರಂಪರೆಯ ಸ್ತೋತ್ರಗಳು ಭಾವುಕರ ಮನಸೂರೆಗೊಳ್ಳುವುದರಲ್ಲಿ ಸಂದೇಹವಿಲ್ಲ. ಪೌರಾಣಿಕಾವಾದ ಶ್ರೀಶನೈಶ್ಚರಕೃತ ನರಸಿಂಹಸ್ತೋತ್ರ, ಭಗವದ್ಧ್ಯಾನಗಳು ಹಾಗೂ ದೇವತಾತಾರತಮ್ಯ – ನವಗ್ರಹಸ್ತೋತ್ರ ಮುಂತಾದವುಗಳು ನಿತ್ಯಪಾರಾಯಣಕ್ಕೆ ಅತ್ಯಂತ ಉಪಕಾರಿಲಯಾಗಿವೆ.
“ಪೌರಾಣೈಃ ಪ್ರಾಕೃತೈರಪಿ” ಎಂಬ ಭಾಗವತಸಂದೇಶದಂತೆ ಪುರಾಣಗಳಲ್ಲಿ ಬಂದ ಹಾಗೂ ಜ್ಞಾನಿಗಳು ರಚಿಸಿದ ಕೃತಿಗಳನ್ನು ಪೂಜಾವಸಾನದಲ್ಲಿ ಪಠಿಸುವುದು ಭಗವಂತನಿಗೆ ಪ್ರಿಯಕರವಾಗಿದೆ. ಈ ಹಿನ್ನೆಲೆಯಲ್ಲಿ ಭಾವುಕರ ಪಾರಾಯಣಕ್ಕೆ ಉಪಯೋಗಿಯಾಗುವಂತೆ ಇದನ್ನು ಸಿದ್ಧಪಡಿಸಲಾಗಿದೆ. ಸುಜನರು ನಿತ್ಯ ಪಾರಾಯಣವನ್ನು ಮಾಡುವುದರ ಮೂಲಕ ಇದರ ಪ್ರಯೋಜನವನ್ನು ಪಡೆದು ಶ್ರೀಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರಾರಾಗಬೇಕೆಂದು ಅಪೇಕ್ಷಿಸುತ್ತೇವೆ.