ग्रन्थपरिचयः

ದೇವತಾರ್ಚನೆ

by Vid.Kambaluru Srivatsacharya · 2026 · ಕನ್ನಡ

ಕನ್ನಡ

ದೇವತಾರ್ಚನೆ

by Vid.Kambaluru Srivatsacharya

(5.0 · 10000 reviews) In Stock
ಪಾಂಚರಾತ್ರಾದಿ ಆಗಮಗಳಲ್ಲಿ ಪ್ರತಿಪಾದಿಸಿರುವಂತೆ ದೇವಪೂಜೆಯು ಭಗವದನುಗ್ರಹವನ್ನು ಪಡೆಯುವ ಪ್ರಮುಖ ಸಾಧನವಾಗಿದೆ. “ನ ದೇವಾ ಮೃಚ್ಛಿಲಾಮಯಾಃ” ಎಂದು ಶ್ರೀಮದ್ಭಾಗವತವು ಪ್ರತಿಪಾದಿಸಿರುವಂತೆ, ದೇವರು ಮಣ್ಣು ಅಥವಾ ಕಲ್ಲಿನ ಮೂರ್ತಿಮಾತ್ರನಲ್ಲ; ಪ್ರತಿಷ್ಠಿತ ವಿಗ್ರಹದಲ್ಲಿ ಸ್ವಯಂ ಭಗವಂತನೇ ಸನ್ನಿಹಿತನಾಗಿರುತ್ತಾನೆ. ಆದ್ದರಿ…

Pages

270

Language

Kannada

Publisher

Sri Vyasatirtha Samshodhana Prathisthanam

Edition

Second

Binding

Perfect Binding

ISBN

978-81-685731-5-4

₹ 150

Inclusive of all taxes

1

About this book

ಪಾಂಚರಾತ್ರಾದಿ ಆಗಮಗಳಲ್ಲಿ ಪ್ರತಿಪಾದಿಸಿರುವಂತೆ ದೇವಪೂಜೆಯು ಭಗವದನುಗ್ರಹವನ್ನು ಪಡೆಯುವ ಪ್ರಮುಖ ಸಾಧನವಾಗಿದೆ. “ನ ದೇವಾ ಮೃಚ್ಛಿಲಾಮಯಾಃ” ಎಂದು ಶ್ರೀಮದ್ಭಾಗವತವು ಪ್ರತಿಪಾದಿಸಿರುವಂತೆ, ದೇವರು ಮಣ್ಣು ಅಥವಾ ಕಲ್ಲಿನ ಮೂರ್ತಿಮಾತ್ರನಲ್ಲ; ಪ್ರತಿಷ್ಠಿತ ವಿಗ್ರಹದಲ್ಲಿ ಸ್ವಯಂ ಭಗವಂತನೇ ಸನ್ನಿಹಿತನಾಗಿರುತ್ತಾನೆ. ಆದ್ದರಿಂದ ಪ್ರತಿಮಾರಾಧನೆಯ ಸಂದರ್ಭದಲ್ಲಿ ಗೋಲಕತ್ರಯದ ಚಿಂತನೆ ಅತ್ಯಂತ ಅವಶ್ಯಕವಾಗಿದೆ. ಈ ಭಾವನೆಯೊಂದಿಗೆ ತಂತ್ರಸಾರೋಕ್ತ ವಿಧಾನವನ್ನು ಅನುಸರಿಸಿ ದೇವಪೂಜೆಯನ್ನು ಆಚರಿಸಿದಲ್ಲಿ ಭಗವದನುಗ್ರಹಕ್ಕೆ ಪಾತ್ರರಾಗಬಹುದು.

ಈ ಹೊತ್ತಿಗೆಯು ಶ್ರೀವ್ಯಾಸರಾಜಮಠದ ಸಂಪ್ರದಾಯಾನುಸಾರ ದೇವಪೂಜೆಯನ್ನು ಆಚರಿಸಲು ಮಾರ್ಗದರ್ಶಕ ಗ್ರಂಥವಾಗಿದೆ. ಶ್ರೀಮಠದಲ್ಲಿ ಪರಂಪರೆಯಿಂದ ಅನುಸರಿಸಿಕೊಂಡು ಬಂದಿರುವ ಅನೇಕ ಸೂಕ್ಷ್ಮಾಚಾರಗಳು, ಪುರಾತನ ಸಂಪ್ರದಾಯಗಳಿಂದ ಬಂದ ವಿಶೇಷ ವಿಧಾನಗಳು ಹಾಗೂ ಯೋಗದೀಪಿಕಾ ಮೊದಲಾದ ಪ್ರಮಾಣಗ್ರಂಥಗಳಲ್ಲಿ ಉಪದಿಷ್ಟವಾದ ಪ್ರಮುಖ ವಿಚಾರಗಳನ್ನು ಒಳಗೊಂಡಿರುವ ಈ ಕೃತಿಯು, ಅರ್ಚಕರು, ಅಧ್ಯೇತೃಗಳು ಹಾಗೂ ಭಕ್ತರಿಗೆ ಅತ್ಯಂತ ಉಪಯುಕ್ತವಾದ ಮಾರ್ಗದರ್ಶಿಯಾಗಿದೆ.

ಸಂಪಾದಕರು : ವಿದ್ವಾನ್ ಕಂಬಾಲೂರು ಶ್ರೀವತ್ಸಾಚಾರ್ಯ

ವಿದ್ವಾನ್ ಕಂಬಾಲೂರು ಶ್ರೀವತ್ಸಾಚಾರ್ಯರು ಶ್ರೀವ್ಯಾಸರಾಜಮಠದ ಶಿಷ್ಯರಾಗಿದ್ದು, ಶಾಸ್ತ್ರಪಾಂಡಿತ್ಯ ಹಾಗೂ ಆಚಾರನಿಷ್ಠೆಗಳಿಂದ ಪ್ರಸಿದ್ಧರಾದ ವಿದ್ವಾಂಸರಾಗಿದ್ದಾರೆ. ಶ್ರೀಮಠದ ಅನೇಕ ಸತ್ಸಂಪ್ರದಾಯಗಳು, ಆರಾಧನಾಕ್ರಮಗಳು ಹಾಗೂ ಆಗಮಪರಂಪರೆಯ ಬಗ್ಗೆ ಆಳವಾದ ಅಧ್ಯಯನವನ್ನು ಹೊಂದಿರುವ ಅವರು, ಅನೇಕ ಪ್ರಾಚೀನ ಗ್ರಂಥಗಳನ್ನು ಪರಿಶೀಲಿಸಿ, ಪ್ರಮಾಣಬದ್ಧವಾಗಿ ಈ ಹೊತ್ತಿಗೆಯನ್ನು ಸಿದ್ಧಪಡಿಸಿದ್ದಾರೆ. ಅವರ ಶ್ರದ್ಧೆ, ಪರಿಶ್ರಮ ಮತ್ತು ವಿದ್ವತ್ತಿನ ಫಲವಾಗಿ ಈ ಕೃತಿ ಶ್ರೀವ್ಯಾಸರಾಜಮಠದ ಪೂಜಾಪರಂಪರೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಅಮೂಲ್ಯ ಗ್ರಂಥವಾಗಿದೆ.